ಗುರುದೇವಿ ಹುಲೆಪ್ಪವನರಮಠ ಇವರು ೧೯೫೯ ಜೂನ್ ೧೩ರಂದು ಬೆಳಗಾವಿ ಜಿಲ್ಲೆಯ ಮುರಗೋಡ ಗ್ರಾಮದಲ್ಲಿ ಜನಿಸಿದರು. ಇಂಗ್ಲಿಷ್ ಭಾಷೆಯಲ್ಲಿ ಪಿ.ಎಚ್.ಡಿ. (ವಚನ ಸಾಹಿತ್ಯಕ್ಕೆ ಸಂಬಂಧಿಸಿ) ಪದವಿ ಪಡೆದ ಬಳಿಕ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುದೇವಿಯವರು ಕನ್ನಡ ಸಾಹಿತ್ಯದಲ್ಲಿ ಹಾಸ್ಯಲೇಖನಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಇವರು ಕವಿಯೂ ಹೌದು. ಕಥೆಗಳಿಗೆ ಹಾಸ್ಯದ ಲೇಪನವಿದ್ದರೂ ಗಂಭೀರ ವಿಷಯವಿರುತ್ತದೆ. == ಸಾಹಿತ್ಯ == === ಹಾಸ್ಯಪ್ರಬಂಧ ಸಂಕಲನ === ನನ್ನಜ್ಜಿ ಗುಜ್ಜಿ ಬಿಡುಗಡೆಯ ಸಡಗರ ಮೂಗು ಮುರಿದವರು ನೀರು ಬಂತು ನೀರು === ವಿಮರ್ಶೆ === ಶರಣಧರ್ಮ ಮತ್ತು ಮಹಿಳೆ ಶರಣರ ದೃಷ್ಟಿಯಲ್ಲಿ ಮನಸ್ಸು === ಜೀವನ ಚರಿತ್ರೆ === ಲಿಂಗೈಕ್ಯ ಬಿದರಿಕುಮಾರ ಸ್ವಾಮಿಗಳು === ಸಂಪಾದನೆ === ಶ್ರೀಮಂತ ಬೆಳ್ಳುಬ್ಬಿ ಮನೆತನದ ಚರಿತ್ರೆ === ಸ್ಮರಣಗ್ರಂಥ === ಬಯಲಸಿರಿ ನೆನಪು ನಂದಾದೀಪ ಗಿರಿನವಿಲು === ಪಿ.ಎಚ್.ಡಿ. ಮಹಾಪ್ರಬಂಧ === : == ಪುರಸ್ಕಾರ == 'ಬಿಡುಗಡೆಯ ಸಡಗರ' ಕೃತಿಗೆ ಲಿಂ.ಮಹಾದೇವಪ್ಪ ಕರ್ಲಟ್ಟಿ ದತ್ತಿನಿಧಿ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ ಲಿಂ.ಚಂದ್ರಮೌಳಿ ಕೆ. ದತ್ತಿನಿಧಿ ಪ್ರಶಸ್ತಿ ಸಾಹಿತ್ಯ ಪ್ರತಿಷ್ಠಾನ, ಬೆಳಗಾವಿ ಪ್ರಶಸ್ತಿ ಮೂಜಗಂ ಗ್ರಂಥ ಪುರಸ್ಕಾರ (೧೯೯೬) ಮಹಾಲಕ್ಷ್ಮಿ ಮಂದಿರ ಪ್ರಶಸ್ತಿ (೧೯೯೭) ಸಾಹಿತ್ಯಶ್ರೀ ಪ್ರಶಸ್ತಿ,ರಾಣಿಬೆನ್ನೂರು (೧೯೯೭) == ಉಲ್ಲೇಖ ==